ಅಚ್ಚಹಸಿರಿನ ಮುಚ್ಚು ಮರೆಯಲಿ
ಹುಚ್ಚು ಮಳೆಯು ಹೆಚ್ಚು ಬರಲು
ಬೆಚ್ಚಗಿದ್ದ ಹಕ್ಕಿ ಮರಿಯು
ಮನವ ಬಿಚ್ಚಿ ತೋರಿತು
ನಸುಕಿನಾ ಬೆಳಗಲ್ಲಿ
ಮಸುಕಾದವೇ ನೆನಪುಗಳು
ಉಸುಕಿನಾ ಗೂಡಲ್ಲಿ
ಹೊಸಕಿ ಹೋದವೇ ಕನಸುಗಳು
ಕಂಡೆ ನಾ ಕನಸುಗಳ
ಜಗವ ಕಾಣುವ ಮೊದಲು
ಹಾರುವಾ ಆಸೆಯು
ರೆಕ್ಕೆ ಬಲಿಯುವ ಮೊದಲು
ಬದುಕಲು ಬೇಕು ಛಲ
ಜೊತೆಗಿರಲಿ ಆತ್ಮಬಲ
ಎಂದು ಹೇಳಿದ್ದಳು ಮಾತು
ತಾಯಿಯು ಜೊತೆ ಕೂತು
ರಿಂಗಣಿಸುತಿವೆ ತಾಯಿಯ
ಆ ಪ್ರೀತಿಯ ನುಡಿಮುತ್ತು
ಏನ ಮಾಡಲಿ ನಾನು
ಅವಳಿಲ್ಲ ಈ ಹೊತ್ತು
ಎನ್ನುದರ ಪೋಷಣೆಗೆ
ಬಲಿಯಾಯಿತೆ ಮಾತೆಯ ಬಲ
ಸೇರಿದಳೆ ಭುವಿಯೊಡಲ
ನಾ ಹೇಗೆ ಮರೆಯಲೇ ಆ ಮಡಿಲ..
ಏನ ಮಾಡಿದರೇನೆ..ಗೆಳತಿ
ಯಾರು ಜೋತೆಗಿದ್ದರೇನೆ
ತಾಯಿಯಿಲ್ಲದ ಮೇಲೆ
ಅನಾಥೆ ತಾನೇ...
3 comments:
I liked this poem the most...
ಏನ ಮಾಡಿದರೇನೆ..ಗೆಳತಿ
ಯಾರು ಜೋತೆಗಿದ್ದರೇನೆ
ತಾಯಿಯಿಲ್ಲದ ಮೇಲೆ
ಅನಾಥೆ ತಾನೇ...
tumba istavaadu saalugalu...
chandada kavite
thank u :)
Post a Comment