Wednesday, July 28, 2010

ಬದಲಾದ ಚಂಚಲತೆಯ ಚಿಟ್ಟೆ....just for you..

ಹೀಗೆ ದಾರೀಲಿ walking ಹೊರಟಿದ್ದೆ.ಯಾಕೋ ತುಂಬಾ ನೆನಪಾದೆ ನೀನು..ಯಾಕಂತ ಗೊತ್ತಿಲ್ಲ.flashback ನಂಗೆ ಬೇಡ...past ಬಗ್ಗೆ ನೆನಪು ಮಾಡ್ಕೊಬಾರದು just present situations ನ enjoy ಮಾಡಬೇಕು ಅಂತ ಅನ್ಕೊಂಡಿದ್ದೆಲ್ಲ ಒಂದೇ ಕ್ಷಣದಲ್ಲಿ ಮಾಯ...ನಿಂಗೆ ಗೊತ್ತಲ್ವಾ ಮೊದ್ಲು ನಾ ಹೇಗಿದ್ದೆ ಅಂತಾ...ಎಲ್ಲರೂ ಒಳ್ಳೇವ್ರು ಅಂತಿದ್ದೆ.ಎಲ್ಲರನ್ನು ಮುಗ್ಧವಾಗಿ ನಂಬ್ತಿದ್ದೆ.ನಂಬೋದೇ ತಪ್ಪು ಅಂತಾ ಬದುಕು ಕಲಿಸ್ಬಿಡ್ತು.
'ಹೇಳಿ ಹೋಗು ಕಾರಣ' book ಓದಿ ನಾ ನಿಂಗೆ ಕೇಳಿದ್ದೆ ನೆನಪಿದ್ಯಾ? ಯಾರಾದ್ರೂ ಇಷ್ಟೆಲ್ಲಾ ಬದಲಾಗೋಕೆ ಸಾಧ್ಯಾನಾ ಅಂತಾ...ಆ ಕ್ಷಣದಲ್ಲಿ ನಂಬೋಕಾಗಿರ್ಲಿಲ್ಲ.but ಹೀಗೂ ಇರ್ತಾರೆ ಅನ್ನೋ ಸತ್ಯ ಈಗ ಗೊತ್ತಾಯ್ತು.ಎಂಥ ಪ್ರಪಂಚ ಇದು...ಮುಗ್ಧ ಮನಸ್ಸು ಅರಳೋ ಮುನ್ನನೇ ಕೊಂದುಬಿಡತ್ತೆ.ಸುಳ್ಳಿನ ಅರಮನೆ ಕಟ್ಟಿ ಸುಖವಾಗಿದ್ದಿಯಾ ನೀನು.ಸತ್ಯಾನೆ ನಂಬಿರೋ ಈ ಬಡಪಾಯಿ ಮಾತು comedy ಅನ್ಸತ್ತೇನೋ ಅಲ್ವಾ...ಯಾಕೋ ಬಿಟ್ಟು ಹೊದೋರ್ನೆಲ್ಲ ಪೂರ್ಣವಾಗಿ ದ್ವೇಷಿಸಬೇಕು ಅನಿಸಿದ್ದಂತು ನಿಜ..ಆದ್ರೆ ಅದೂ ಬರ್ದೇ ಒದ್ದಾಡೋ ಪರಿಸ್ಥಿತಿ ನಂದು.ವಂಚನೆ ಮಾಡಿದೋರ ಕಣ್ಣನ್ನ ಅದೇ ಮುಗ್ಧ ಪ್ರೀತಿ ಇಂದ ನೋಡಿದ್ರೆ ಎಂಥ ವಂಚಕರಿಗಾದ್ರು guilt ಕಾಡತ್ತಂತೆ.ನಂಗೆ ನಿನ್ನ ಆ guilt feel ಬೇಡ.ಮೊದಲು ತುತ್ತು ಮೊದಲ ಪ್ರಾರ್ಥನೆ ಎರಡೂ ನನ್ನ ಪ್ರೀತಿಪಾತ್ರರಿಗೆ ಅಂತ ಹೇಳ್ತಿದ್ದ ನಂಗೆ ಈಗ ಎರಡೂ ಬೇಡ ಅಂತಾ ಅನ್ನಿಸ್ತಿದೆ.ಸುಮ್ಮನೆ ಸದ್ದಿಲ್ಲದೇ ಬದಲಾದ್ಯಲ್ಲ ನಿಂಗೂ ಹಾಗೆ ಅನ್ನಿಸ್ತಾ ಇದ್ಯಾ?ಗೊತ್ತಿಲ್ಲ..ನೀನು ಹಾರೋ ಕನಸು ಕಂಡೆ.ಹಾರೋದಿಕ್ಕೆ ನಿನಗೆ ನನ್ನ ರೆಕ್ಕೆ ಕೊಟ್ಟೆ.ಹಾರೋದಿಕ್ಕೆ ಕಲಿಸಿದೆ.ನೀ ಹಾರ್ತಾ ಹೋಗ್ಬಿಟ್ಟೆ .ಆದ್ರೆ ನಾ ಇಲ್ಲೇ ಉಳಿದ್ಬಿಟ್ಟೆ sorry ನಾನೇನು ನಿಂಗೆ ಬೈತಿಲ್ಲ ನಂಗೊತ್ತು ನಿನ್ನ್ ಬದುಕು ನಿನ್ನ್ ಇಷ್ಟ.ನಾ ನಿಂಗೆ ಏನು ಅಲ್ವಾ?ನಾವು firends ಹಾಗೆ ಹೀಗೆ...ಕೊನೆವರ್ಗು ಹೀಗೆ friends ಅಂತೆಲ್ಲ ಹೇಳ್ತಿದ್ದ್ಯಲ್ಲ...ಹ್ಮ್ ಹೋಗ್ಲಿ ಬಿಡು...ಆದ್ರೆ ನೀ ನನ್ನ ಮತ್ತೆ ಭೇಟಿ ಅಗೊದಿರ್ಲಿ ನನ್ನ ನೋಡ್ಲೂಬೇಡ please...ಮೊದಲಾದ್ರೆ ಅ ನೋಟದಲ್ಲಿ ಪವಿತ್ರ ಸ್ನೇಹ ಇತ್ತು...ಈಗ... ವಂಚನೆಯ ಎರಡನೇ ಅಧ್ಯಾಯ ಅನ್ಸುತ್ತೆ ನಂಗೆ.ನಿನ್ನ ಬದಲಾದ ಬದುಕಲ್ಲಿ ಆ ವಂಚನೆಯ ಪಂಜರದ ಪುಟ್ಟ ಹಕ್ಕಿ ಆಗೋದು ನಂಗೆ ಇಷ್ಟ ಇಲ್ಲ...ಗೂಬೆ ತರಾ ಒಂಟಿ ಆಗಿ ಇದ್ದರು ಪರವಾಗಿಲ್ಲ...ಒಳಿತೋ ಕೆಡುಕೋ ಜೊತೆಲೇ ಇರೋ ಬಳ್ಳಿ ಬೇಕು...ನಿನ್ನಂತ ವಸಂತದ ಕೋಗಿಲೆ ಬೇಡ.ಎಲ್ಲೇ ಇದ್ರೂ ನೀ ನಗ್ತಾ ಇರು ನನ್ನ ಕಣ್ಣೀರು ಒರೆಸೋಕೆ try ಮಾಡಬೇಡ.ಒಂಟಿತನದ ಶಾಪ ನಿಂಗೆ ಅಂಟೀತು .ಏನೇನೋ ಮಾತಾಡಿದ್ನಾ...ಬದಲಾದ ನಿನ್ನಂತೋರು ಇಂತ ಮಾತು ಕೇಳಲೇಬೇಕು....ಹೀಗೆ ಯಾರನ್ನೂ ಕಳ್ಕೊಬೇಡ...ಹೋಗಿಬರ್ತೀನಿ..sorry..ಹೋಗ್ತೀನಿ.bye...

4 comments:

Praveen said...

good one sou...
the way of addressing and explaining things are impressive.

"ಒಳಿತೋ ಕೆಡುಕೋ ಜೊತೆಲೇ ಇರೋ ಬಳ್ಳಿ ಬೇಕು...ನಿನ್ನಂತ ವಸಂತದ ಕೋಗಿಲೆ ಬೇಡ."

this line i liked the most. geechta iru :)

It Starts said...

may i ask ..........who is dat ವಸಂತದ ಕೋಗಿಲೆ whom u kept away frm you........gud try to write by explaining all situations also..

divya said...
This comment has been removed by the author.
ಸಂಧ್ಯಾ ಶ್ರೀಧರ್ ಭಟ್ said...

Friends badalaagoke sadyane illa anta vaada madtiddolu naanu... BUT nanagoo aa anubhavavannu torisikottidde jeevana.. Ninna lekhana odi aa nenapugalu matte bantu...